ಕಾಸರಗೋಡು : ಕೇರಳದ ಎಡ- ಬಲ ರಂಗಗಳು ವೋಟ್ ಬ್ಯಾಂಕ್ ಗುರಿಯಾಗಿಸಿ ಯೋಜನೆಗಳನ್ನು ಜ್ಯಾರಿಗೊಳಿಸುವಾಗ ಕೇಂದ್ರವನ್ನಾಳುವ ನರೇಂದ್ರ ಮೋದಿ ಸರಕಾರ ಯಾವುದೇ ವಿವೇಚನೆಯ ತಾರತಮ್ಯ ಇಲ್ಲದೇ ಆಡಳಿ ನಿರ್ವಹಿಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಹೇಳಿದರು. ಕಾಸರಗೋಡು ಜಿಲ್ಲಾ ಪಂ. ಸಿವಿಲ್ ಸ್ಟೇಷನ್ ಡಿವಿಜನಿನ
ವಾರ್ಡುಗಳ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಸರಗೋಡು ಜಿಲ್ಲಾಡಳಿತ ಕೇಂದ್ರ ಪ್ರದೇಶವನ್ನು ಅನೇಕ ಕಾಲಗಳಿಂದ ಮುಸ್ಲಿಂಲೀಗ್ ಪ್ರತಿನಿಧಿಗಳು ಪ್ರತಿನಿಧಿಸುತ್ತಿದ್ದಾರೆ. ಆದರೆ ಕಾಸರಗೋಡು ಜಿಲ್ಲೆ ರೂಪೀಕರಣಗೊಂಡಾಗ ಮುಂದಿಟ್ಟ ಬೇಡಿಕೆಗಳು ಇಂದಿಗೂ ಪರಿಹಾರವಾಗದೇ ಬೇಡಿಕೆಗಳಾಗಿಯೇ ಉಳಿದಿದೆ ಎಂದವರು ದೂರಿದರು. ಬಿಜೆಪಿ ಪ್ರತಿನಿಧಿಸುವ ಪಂಚಾಯತಿನ ವಾರ್ಡುಗಳಿಗೆ ಫಂಡ್ ನೀಡುವಲ್ಲಿ ಜಿ. ಪಂ, ಬ್ಲಾಕ್. ಪಂ ಆಡಳಿತ ಸಮಿತಿಗಳು ವಿವೇಚನೆಯ ಅವಗಣನೆ ಮುಂದುವರಿಸುತ್ತಿದೆಯೆಂದೂ ಅವರು ಅಭಿಪ್ರಾಯಪಟ್ಟರು.
ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಪ್ರಮೀಳ ಮಜಲ್ ಅಧ್ಯಕ್ಷತೆ ವಹಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿ. ಪಂ. ಅಭ್ಯರ್ಥಿ ಪಿ. ಆರ್. ಸುನಿಲ್, ಜಿಲ್ಲಾ ಸೆಲ್ ಕೋರ್ಡಿನೇಟರ್ ಸುಕುಮಾರ ಕುದ್ರೆಪಾಡಿ, ಮಧೂರು ಪಂ. ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮಧೂರು ಈಸ್ಟ್ ಏರಿಯಾ ಪ್ರ. ಕಾರ್ಯದರ್ಶಿ ಧನಂಜಯ ಮಧೂರು ಮಾತನಾಡಿದರು.































