ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟಿಗೆ ಔದ್ಯೋಗಿಕ ವಿದಾಯ ಪ್ರಕಟಿಸಿದ್ದಾರೆ. ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲವರು ಟೆಸ್ಟ್ ಕ್ರಿಕೆಟಿನ ವಿದಾಯ ಪ್ರಕಟಿಸಿದ್ದಾರೆ. ಇದರೊಂದಿಗೆ ಕ್ರಿಕೆಟ್ ಕಿಂಗ್ ಕೊಹ್ಲಿ ಅವರ 14ವರ್ಷಗಳ ಟೆಸ್ಟ್ ಕ್ರಿಕೆಟ್ ಕೆರಿಯರ್ ಅಂತ್ಯ ಕಂಡಿದೆ.
ಮೊನ್ನೆ ಮೊನ್ನೆಯಷ್ಟೇ ಟೆಸ್ಟ್ ಕ್ರಿಕೆಟ್ ಗೆ ರೋಹಿತ್ ಶರ್ಮ ವಿದಾಯ ಹೇಳಿದ್ದರು. ಅದರ ಬೆನ್ನಲ್ಲೇ ಕೊಹ್ಲಿ ನಿರ್ಗಮನವಾಗಿರುವುದು ಟೆಸ್ಟ್ ಕ್ರಿಕೆಟಿನ ದಂತಕತೆಗಳ ನಿರ್ಗಮನದ ಕತೆ ಸಾರುತ್ತದೆ.
ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ತಂಡದ ಅತ್ಯುತ್ತಮ ನಾಯಕ ಎನಿಸಿದ್ದರು. 123ಟೆಸ್ಟ್ ಪಂದ್ಯ ಆಡಿರುವ ಅವರು 46.9ಸರಾಸರಿಯಲ್ಲಿ 9,230ರನ್ ಗಳಿಸಿದ್ದಾರೆ. 254ರನ್ ಗಳಿಸಿ ಔಟಾಗದೇ ಉಳಿದದ್ದು ಅವರ ವೈಯ್ಯಕ್ತಿಕ ಗರಿಷ್ಟ ರನ್. ಟೆಸ್ಟಿನಲ್ಲಿ 31ಅರ್ಧ ಶತಕ, 30ಶತಕ ಸಿಡಿಸಿದ ಶ್ರೇಯಸ್ಸು ಅವರದ್ದು.
ದೇಶ – ವಿದೇಶ
ನವದೆಹಲಿ: ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳನ್ನು ಸದೆ ಬಡಿಯಲು ಭಾರತ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಬಳಿಕ ಉಭಯ ರಾಷ್ಟ್ರಗಳ ನಡುವೆ ನೆಲೆಸಿದ್ದ ಕದನ ಸ್ವರೂಪದ ಸಂಘರ್ಷ ಕೊನೆಗೊಳಿಸಲು , ಕದನ ವಿರಾಮದ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತದ ಮೇಲೆ ಧಾಳಿ ನಡೆಸಿದೆ. ಇದಕ್ಕೆ ಭಾರತ ಸಮರ್ಥ ಪ್ರತ್ಯುತ್ತರ ನೀಡಿ ಕೆಣಕಿದರೆ ಪ್ರತ್ಯಾಕ್ರಮಣದ ಎಚ್ಚರಿಕೆ ಘೋಷಿಸಿದೆ. ಇದರಂಗವಾಗಿ ಭಾರತೀಯ ಸೇನೆಗೆ ಪ್ರತ್ಯಾಕ್ರಮಣದ ಧಾಳಿ ನಡೆಸಲು ಅನುಮತಿ ನೀಡಲಾಗಿದೆ.
ಕದನ ವಿರಾಮ ಘೋಷಿಸಿ ಒಪ್ಪಂದ ನಡೆದ ಬೆನ್ನಲ್ಲೇ ಗಡಿ ರಾಜ್ಯಗಳಲ್ಲಿ ಪಾಕ್ ಕಡೆಯಿಂದ ಡ್ರೋನ್ ಧಾಳಿ ನಡೆದಿದೆ. ಈ ಧಾಳಿಯನ್ನು ಭಾರತ ಹಿಮ್ಮೆಟ್ಟಿಸಿದೆ. ಕದನ ವಿರಾಮ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಸೂಕ್ತ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಗೆ ಆದೇಶವಾಗಿದೆ. ಇದು ಪಾಕಿಸ್ತಾನ ಯುದ್ಧವನ್ನು ತಾನೇ ಆಹ್ವಾನಿಸಿಕೊಂಡದ್ದಕ್ಕೆ ಸಮಾನವಾಗಿದೆ.
ಈ ಸಂಬಂಧ ತುರ್ತು ಸುದ್ದಿಗೋಷ್ಟಿ ನಡೆಸಿದ ಭಾರತೀಯ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಪಾಕಿಸ್ತಾನದ ಕೃತ್ಯ ಅತ್ಯಂತ ಖಂಡನೀಯವಾಗಿದೆ. ಭಾರತೀಯ ಸೇನೆ ಇದನ್ನು ನಿಭಾಯಿಸಿಕೊಳ್ಳಲಿದೆ. ಗಡಿ ಭದ್ರತಾ ಪಡೆಗೆ ಈ ಸಂಬಂಧ ಆದೇಶ ನೀಡಲಾಗಿದೆ. ಸಶಸ್ತ್ರ ಸೇನೆ ತೀವ್ರ ನಿಗಾ ವಹಿಸಿದೆ ಎಂದರು.
ಈಬಾರಿಯ ಐಪಿಎಲ್ ಕ್ರಿಕೆಟ್ ಟೂರ್ನ್ ಮೆಂಟನ್ನು ಅನಿಶ್ಚಿತಾವಧಿಗೆ ರದ್ದುಗೊಳಿಸಲಾಗಿದೆ. ಪಾಕಿಸ್ತಾನದ ವಿರುದ್ಧ ಭಾರತ ಪ್ರಬಲ ತಿರುಗೇಟು ನೀಡಿದ ಹಿನ್ನೆಲೆಯಲ್ಲಿ , ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಕ್ರಿಕೆಟ್ ಆಟಗಾರರಿಗೆ ರಕ್ಷಣೆ, ಭದ್ರತೆ ಒದಗಿಸಬೇಕಾದ ಕಾರಣ ಬಿಸಿಸಿಐ ನಿರ್ದೇಶನದಂತೆ ಐಪಿಎಲ್ ರದ್ದುಪಡಿಸಲಾಯಿತು.
ನಿನ್ನೆ ನಡೆದ ಪಂಜಾಬ್ ಕಿಂಗ್ಸ್ ಇಲೆವನ್ – ದೆಹಲಿ ಕ್ಯಾಪಿಟಲ್ಸ್ ನಡುವಣ ಪಂದ್ಯ ಅರ್ಧದಲ್ಲೇ ಮೊಟಕಾದ ಹಿನ್ನೆಲೆಯಲಿ ಟೂರ್ನಿಯ ಕುರಿತು ಅನಿಶ್ಚಿತತೆ ಮೂಡಿತ್ತು. ಯುದ್ಧ ಸಮಾನ ಸಹಚರ್ಯ ನೆಲೆಸಿರುವುದರಿಂದ ವಿದೇಶಿ, ಸ್ವದೇಶಿ ಆಟಗಾರರಿಗೆ ಭದ್ರತೆ ಮತ್ತು ಮೈದಾನದ ಭದ್ರತೆಯ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದಂತೆ ಬಿಸಿಸಿಐ ಈ ಕ್ರಮ ಕೈಗೊಂಡಿದೆ.
ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ತಮ್ಮ ಛಲಭರಿತ ನಾಯಕತ್ಶದಲ್ಲಿ ಭಾರತಕ್ಕೆ ಎರಡೆರಡು ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಅವರು ತನ್ನ ಸೋಷಿಯಲ್ ಮೀಡಿಯ ಖಾತೆಯಲ್ಲಿ ಪೋಸ್ಟ್ ಹಾಕಿ ವಿಷಯ ಹಂಚಿಕೊಳ್ಳುವ ಮೂಲಕ ದೀರ್ಘ ಸ್ವರೂಪದ ಕಲಾತ್ಮಕ ಕ್ರಿಕೆಟಿಗೆ ವಿದಾಯ ಘೋಷಣೆ ಪ್ರಕಟಿಸಿದರು.
ಆಯ್ಕೆ ಸಮಿತಿಯು ಟೆಸ್ಟ್ ಕ್ರಿಕೆಟಿನ ನಾಯಕತ್ವ ಸ್ಥಾನದಿಂದ ರೋಹಿತ್ ಅವರನ್ನು ಕೆಳಗಿಳಿಸಲು ನಿರ್ಧರಿಸಿದೆ ಎಂಬ ವದಂತಿಯೊಂದು ಪ್ರಕಟವಾದ ಬೆನ್ನಲ್ಲೇ ರೋಹಿತ್ ಶರ್ಮ ಸ್ವಯಂಪ್ರೇರಿತರಾಗಿ ಟೆಸ್ಟ್ ಗೆ ವಿದಾಯ ಘೋಷಿಸಿರುವುದು ಕೆಲವು ಗುಮಾನಿಗಳಿಗೆ ಕಾರಣವಾಗಿದೆ.
ಕಳೆದ 2024ರ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಅವರು ಭಾರತೀಯ ಟ್ವೆಂಟಿ-20ತಂಡದ ನಾಯಕ ಸ್ಥಾನ ತೊರೆದಿದ್ದರು. ಬಿಳಿ ಉಡುಪಿನ ಕ್ರಿಕೆಟಿನಲ್ಲಿ ಭಾರತೀಯ ತಂಡವನ್ನು ಪ್ರತಿನಿಧೀಕರಿಸಲು ತನಗೆ ದೊರಕಿಜ ಅವಕಾಶ ನನ್ನ ಕ್ರಿಕೆಟ್ ಜೀವನದ ಮೌಲ್ಯಯುತ ಗಳಿಗೆ ಎಂದಿರುವ ಅವರು ಇಷ್ಟು ಕಾಲದ ಟೆಸ್ಟ್ ಪಯಣದಲ್ಲಿ ಜತೆಗಿದ್ದವರೆಲ್ಲರಿಗೂ , ಬೆಂಬಲಕ್ಕೂ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ಸಂದರ್ಭ ಏಕದಿನ ಕ್ರಿಕೆಟಿನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ತನ್ನ ಕಪ್ತಾನಗಿರಿಯನ್ನವರು ಮುಂದುವರಿಸುವ ಸೂಚನೆ ನೀಡಿದ್ದಾರೆ.
67 ಟೆಸ್ಟ್ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮ 40.57ಸರಾಸರಿಯಲ್ಲಿ 3909 ರನ್ ಗಳಿಸಿದ್ದಾರೆ. ಇದರಲ್ಲಿ 10ಶತಕ, 16ಅರ್ಧ ಶತಕ ಒಳಗೊಂಡಿದೆ. ಆರಂಭಿಕ ದಾಂಡಿಗನಾಗಿ, ಮಧ್ಯಮ ಕ್ರಮಾಂಕದ ಕಾವಲುಗಾರನಾಗಿ ಭಾರತೀಯ ಕ್ರಿಕೆಟಿನ ಆಧಾರಸ್ತಂಭ ಎಂದೇ ಕರೆಯಲ್ಪಟ್ಟಿದ್ದ ಅವರು ವಿದೇಶಿ ಪಿಚ್ ಗಳಲ್ಲಿ ಕೂಡಾ ಮಿಂಚಿದ್ದರು.
2019ರಲ್ಲಿ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 212 ರನ್ ಗಳ ದ್ವಿಶತಕ ಭಾರಿಸಿದ್ದ ರೋಹಿತ್ ಟೆಸ್ಟ್ ಕ್ರಿಕೆಟಿನ ಪಾದಾರ್ಪಣ ಪಂದ್ಯದಲ್ಲೇ ದ್ವಿಶತಕ ಭಾರಿಸಿದ ದಾಂಡಿಗನೆಂಬ ಪ್ರಶಂಸೆಯ ಒಡೆಯ., ಇದು ದಾಖಲೆಯೂ ಹೌದು.
ಟೆಸ್ಟ್ ಕ್ರಿಕೆಟಿನಲ್ಲಿ ಅನುಭವಿ ಆಟಗಾರನಾಗಿದ್ದ ಅವರ ನಿವೃತ್ತಿಯೊಂದಿಗೆ ಕಲಾತ್ಮಕ ಕ್ರಿಕೆಟಿನ ಒಂದು ಯುಗಾಂತ್ಯವಾಗುತ್ತಿದೆ
ದೆಹಲಿ: ವಾರಾಣಾಸಿಯ ಪ್ರಸಿದ್ಧ ಯೋಗಗುರು, ಪದ್ಮಶ್ರೀ ಪುರಸ್ಕೃತ 129ವರ್ಷದ ಪದ್ಮಶ್ರೀ ಶಿವಾನಂದ ಬಾಬಾ (129)
ಶನಿವಾರ(ಮೇ3)ರಾತ್ರಿ ವಿಧಿವಶರಾದರು.
ಕಳೆದ ಮೂರು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲಿದ್ದರು. ಶನಿವಾರ ರಾತ್ರಿ 8.30ಕ್ಕೆ ಅಸುನಿಗಿದ್ದು, ಮೇ 4ರಂದು ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.1986 ಅಗಸ್ಟ್ 8ರಂದು ಅವಿಭಜಿತ ಬಂಗಾಳದ (ಈಗ ಬಾಂಗ್ಲಾ) ಶ್ರೀಹಟ್ಟಾ ಜಿಲ್ಲೆಯ ಹರಿಪುರ್ ನಲ್ಲಿ ಅವರು ಜನಿಸಿದ್ದರು. ಬಾಬಾ ಪೋಷಕರು ಭಿಕ್ಷೆ ಬೇಡಿ ಜೀವಿಸುತ್ತಿದ್ದರು. ಕಿತ್ತು ತಿನ್ನುವ ಬಡತನದಿಂದಾಗಿ ಮಗನ ಭವಿಷ್ಯ ಹಾಳಾಗದಿರಲಿ ಎಂದು ಬಯಸಿ 4ರ ಹರೆಯದ ಬಾಲಕನನ್ನು ಹೆತ್ತವರು ನವದ್ವೀಪ ನಿವಾಸಿ ಯೋಗಿ ಬಾಬಾ ಓಂಕಾರಾನಂದ ಗೋಸ್ವಾಮಿ ಅವರಿಗೆ ಒಪ್ಪಿಸಿದ್ದರು. ಶಿವಾನಂದರ 6ವಯಸ್ಸಿನಲ್ಲೇ ಅವರ ಪೋಷಕರು, ಸಹೋದರಿ ನಿಧನರಾಗಿದ್ದರು.
ಆರನೇ ವಯಸ್ಸಿನಲ್ಲೇ ಯೋಗ ಜೀವನದ ಮೊರೆಹೋದ ಶಿವಾನಂದರು ತಮ್ಮ ಗುರುಗಳ ಸಹವರ್ತಿತ್ವದಲ್ಲಿ ಆಧ್ಯಾತ್ಮಿಕ ಅಧ್ಯಯನಗಳಲ್ಲಿ ತೊಡಗಿದ್ದರು. ಯೋಗ ಸಾಧನೆಗಾಗಿ 2022ರಲ್ಲಿ ಭಾರತ ಸರಕಾರ ಶಿವಾನಂದ ಬಾಬಾ ಅವರಿಗೆ ಪದ್ಮಶ್ರೀ ಘೋಷಿಸಿತ್ತು. ಆಗ ಅವರಿಗೆ 126ವರ್ಷ ವಯಸಾಗಿತ್ತು.
ಪದ್ಮಶ್ರೀ ಸ್ವೀಕರಿಸಲು ರಾಷ್ಟ್ರಪತಿ ಭವನ ತಲುಪಿದ್ದಾಗ ಅವರು ಮೊದಲು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ನಂದಿಮುದ್ರೆಯಲ್ಲಿ ನಮಸ್ಕರಿಸಿ ಯೋಗ ಭಂಗಿ ಪ್ರದರ್ಶಿಸಿದ್ದರು. ಇದು ದೇಶದ ಗಮನ ಸೆಳೆದಿತ್ತು.
ಮಧುಬನಿ(ಬಿಹಾರ): ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಧರ್ಮವನ್ನು ಕೇಳಿ ಭಯೋತ್ಪಾದನಾ ಧಾಳಿ ನಡೆಸಿದ ಉಗ್ರಗಾಮಿಗಳು
ಯಾವ ಹುತ್ತದಲ್ಲೇ ಅಡಗಿದ್ದರೂ ಪತ್ತೆ ಹಚ್ಚಿ ಊಹೆಗೂ ಮೀರಿದ ಶಿಕ್ಷೆ ನೀಡುವುದು ಶತಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣವಾಗಿ ಪ್ರಕಟಿಸಿ ಸಂದೇಶ ರವಾನಿಸಿದ್ದಾರೆ.
“ಇಂದು ಗುರುವಾರ ಬಿಹಾರದ ನೆಲದಿಂದ ನಾನು ಜಗತ್ತಿಗೇ ಹೇಳಬಯಸುತ್ತೇನೆ..ಭಾರತವು ಪ್ರತಿಯೊಬ್ಬ ಉಗ್ರನನ್ನೂ ಸುಮ್ಮನೆ ಬಿಡುವುದಿಲ್ಲ. ಅಡಗುತಾಣ ಹೊಕ್ಕಿ ಅವರನ್ನು ಹೊಡೆದುರುಳಿಸುತ್ತೇವೆ. ಭೂಮಿಯ ಯಾವುದೇ ಮೂಲೆಯಲ್ಲಿ ಉಗ್ರರು ಅಡಗಿದ್ದರೂ ಅವರನ್ನು ಬಿಡಲಾರೆವೆಂದು ಅವರು ರಾಜಾರೋಷವಾಗಿ, ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ “ಭಯೋತ್ಪಾದನಾ ಕೃತ್ಯಗಳಿಂದ ಭಾರತದ ಶಕ್ತಿಗುಂದಿಸಲು ಸಾಧ್ಯವಿಲ್ಲ. ಧಾಳಿಯಲ್ಲಿ ಮಡಿದವರಿಗೆ ನ್ಯಾಯ ಸಲ್ಲಬೇಕು, ಈ ಸಂಕಲ್ಪದಲ್ಲಿ ದೇಶವೇ ಒಂದಾಗಬೇಕು ಎಂದವರು ನುಡಿದರು. ಮಾನವೀಯತೆಯಲ್ಲಿ ನಂಬಿಕೆ ಇಡುವ ಜಗತ್ತಿನ ದೇಶಗಳು ಭಾರತದ ಜತೆಗಿವೆ. ಈ ಸಂಕಷ್ಟದ ಸಮಯದಲ್ಲಿ ಬೆಂಬಲಿಸಿದ ದೇಶಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದೂ ಮೋದಿ ನುಡಿದರು.
ಪಹಲ್ಗಾಮ್ ಭಯೋತ್ಪಾದಕ ಧಾಳಿಗೆ ಪ್ರತ್ಯುತ್ತರವಾಗಿ ಭಾರತ ಈಗಾಗಲೇ ಪಾಕಿಸ್ತಾನ ಜತೆಗಿನ ರಾಜ ತಾಂತ್ರಿಕ ಸಂಬಂಧ ವಿಚ್ಛೇದಿಸಿದೆ. ಪ್ರಮುಖವಾದ ಐದಾರು ನಿರ್ಣಯಗಳೊಂದಿಗೆ ಪಾಕಿಸ್ಥಾನಕ್ಕೆ ಬಿಸಿ ಮುಟ್ಟಿಸಲಾಗಿದೆ. ಅಷ್ಟೇ ಅಲ್ಲದೆ ಪಾಕ್ ಸರಕಾರವು ಭಾರತವನ್ನು ಕೆಣಕಿ ತನ್ನ ಎಕ್ಸ್ ನಲ್ಲಿ ಪೋಸ್ಟ್ ಹಾಕುತ್ತಿದ್ದುವು. ಈ ಕಾರಣದಿಂದ ಚಾಲ್ತಿಯಲ್ಲಿದ್ದ ಪಾಕ್ ಸರಕಾರದ ಅಧಿಕೃತ ಎಕ್ಸ್ ಖಾತೆಯನ್ನೇ ಭಾರತದಲ್ಲಿ ಸ್ತಬ್ಧ ಗೊಳಿಸಲಾಗಿದೆ. ಇದೇ ರೀತಿ ಪಾಕ್ ಆಧೀನದ ಎಲ್ಲ ಸಮಾಜಿಕ ಜಾಲತಾಣಗಳನ್ನೂ ಭಾರತದಲ್ಲಿ ರದ್ದುಗೊಳಿಸಲಾಗಿದೆ.
ವ್ಯಾಟಿಕನ್ ಸಿಟಿ: ರೋಮನ್ ಕ್ಯಿಥೋಲಿಕ್ ನ ಮೊದಲ ಲ್ಯಾಟಿನ್ ಅಮೇರಿಕ ಮೂಲದ ಪೋಪ್ ಪ್ರಾನ್ಸಿಸ್ ಅಸ್ತಂಗತರಾದರು ಎಂದು ವ್ಯಾಟಿಕನ್ ಸಿಟಿ ಪ್ರಕಟಿಸಿದೆ.
ಅವರಿಗೆ 88ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಡಬಲ್ ನ್ಯುಮೋನಿಯಾ ತಗುಲಿ ಗಂಭೀರ ಆರೋಗ್ಯ ಸಮಸ್ಯಿಂದ ಚೇತರಿಸಿದ್ದರು.
ಸೋಮವಾರ ಬೆಳಿಗ್ಗೆ 7.35ಕ್ಕೆ ಅವರು ಕೊನೆಯುಸಿರೆಳೆದರೆಂದು ಪ್ರಕಟಿಸಲಾಗಿದೆ. ಜಾರ್ಜ್ ಮಾರಿಯೊ ಬರ್ಗೊಗ್ಲಿಯೊ (ಪೋಪ್ ಫ್ರಾನ್ಸಿಸ್) 2013 ಮಾ.13ರಂದು ಪೋಪ್ ಆಗಿ ಆಯ್ಕೆಗೊಂಡಿದ್ದರು. ಇಡೀ ಬದುಕನ್ನು ಇಗರ್ಜಿ ಅನುಬಂಧಿತ ಕ್ರೈಸ್ತ ಧರ್ಮಕ್ಕೆ ಮುಡಿಪಾಗಿಟ್ಟ ಅವರು ಸಂತಶ್ರೇಷ್ಠರೆಂದು ವ್ಯಾಟಿಕನ್ ಸಿಟಿ ಹೇಳಿದೆ.
ಮುಂಬೈ ಧಾಳಿ(2008)ಯ ಪ್ರಧಾನ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಪ್ರಜೆ, ಆಂತರಾಷ್ಟ್ರೀಯ ಭಯೋತ್ಪಾದಕ ಮುಖಂಡ ತಹಾವುರ್ ಹುಸೇನ್ ರಾಣಾ ಮುಂಬೈ ಆಕ್ರಮಣಕ್ಕೂ ಮುನ್ನ ಕೇರಳದ ಕೊಚ್ಚಿಗೆ ಸಪತ್ನೀಕನಾಗಿ ಬಂದು ತಂಗಿರುವುದು ದೃಢಗೊಂಡಿದೆ.
ಈ ಹಿನ್ನೆಲೆಯಲ್ಲಿ ಎನ್.ಐ.ಎ ಕಸ್ಟಡಿಯಲ್ಲಿ ವಿಶೇಷ ಭದ್ರತೆಯೊಂದಿಗೆ ವಿಚಾರಣೆಗೆ ಒಳಗಾಗುತ್ತಿರುವ ಈತನನ್ನು ಕೊಚ್ಚಿಗೆ ಕರೆತಂದು ವಿಚಾರಣೆ ನಡೆಸಲು ಎನ್.ಐ.ಎ ನಿರ್ಧರಿಸಿದೆ. ಈತ ಕೊಚ್ಚಿಗೆ ಬಂದಿರುವುದು ಉಗ್ರಗಾಮಿಗಳ ಸೆಲ್ ಗೆ ರಿಕ್ರೂಟ್ ಮೆಂಟ್ ನಡೆಸಲಿಕ್ಕೆಂಬ ಮಾಹಿತಿ ಎನ್.ಐ.ಎ ಗೆ ದೊರೆತಿದೆ. 2008ರಲ್ಲಿ ಕೇರಳದಲ್ಲಿ ರಾಣಾ ಗೆ ಸಹಕಾರ ನೀಡಿದ ಓರ್ವ ವ್ಯಕ್ತಿಯನ್ನು ಎನ್.ಐ.ಎ ಪತ್ತೆ ಹಚ್ಚಿದ್ದು, ಈತ ಕಸ್ಟಡಿಯಲ್ಲಿದ್ದಾನೆಂದು ವರದಿಯಾಗಿದೆ.
ಉಗ್ರರ ನಾಯಕ ರಾಣಾ ಹಾಗೂ ಕಸ್ಟಡಿಯಲ್ಲಿರುವಾತನನ್ನು ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸಲು ಎನ್.ಐ.ಎ ನಿರ್ಧರಿಸಿದೆ. 2008ರ ನವಂಬರ್ 26ರಂದು ಮುಂಬೈ ಭಯೋತ್ಪಾದಕ ಧಾಳಿ ನಡೆದಿತ್ತು. ಇದರ ಮುನ್ನ ಉಗ್ರ ರಾಣಾ ದೇಶದ ವಿವಿದೆಡೆ ಸಂಚರಿಸಿದ್ದಾನೆ. ಈ ಪೈಕಿ ಕೇರಳ ಸಂದರ್ಶನ ಮತ್ತು ಕೇರಳದಿಂದ ನಡೆಸಿದ ಸಿದ್ಧತೆಗಳ ಕುರಿತು ಎನ್.ಐ.ಎ ಸೂಕ್ಷ್ಮ ತನಿಖೆ ನಡೆಸುತ್ತಿದೆ.
ಏಕದಿನ ಕ್ರಿಕೆಟ್ ಬ್ಯಾಟರುಗಳಿಗಷ್ಟೇ ಮೆರೆಯಲು ಅನುಕೂಲವಾಗಿದೆ ಎಂಬ ದೀರ್ಘ ಕಾಲದ ಪ್ರೇಕ್ಷಕ ಕಳವಳಕ್ಕೆ ಪರಿಹಾರ ಕಂಡುಕೊಳ್ಳಲು ಬಿಸಿಸಿಐ ಮುಂದಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಬಿಸಿಸಿಐ) ಈ ಬಗ್ಗೆ ಚಿಂತಿಸಿದ್ದು, ಏಕದಿನ ಪಂದ್ಯದಲ್ಲಿ ಇರುವ ಎರಡು ಹೊಸ ಚೆಂಡುಗಳ ಬಳಕೆಯಲ್ಲಿ ಬದಲಾವಣೆ ತರಲು ಚಿಂತನೆ ನಡೆಸಿರುವುದಾಗಿ ವರದಿಯಾಗಿದೆ. ಈ ಶಿಫಾರಸನ್ನು ಐಸಿಸಿ ನಿರ್ದೇಶಕ ಮಂಡಳಿ ಸ್ಥಿರೀಕರಿಸಬೇಕಾಗಿದೆ. ಈ ಮೂಲಕ ಏಕದಿನ ಕ್ರಿಕೆಟನ್ನು ಐಪಿಎಲ್ ಮಾದರಿಯಲ್ಲಿ ಆಕರ್ಷಿಸಲು ಚಿಂತನೆ ನಡೆದಿದೆ.
ಇದು ಸ್ವೀಕೃತವಾಗಿ ಸ್ಥಿರೀಕರಣಗೊಂಡರೆ ಕ್ರಿಕೇಟಿನ ಪರಿಷ್ಕೃತ ನಿಯಮಗಳಲ್ಲಿ ಇದರ ಸೇರ್ಪಡೆಯಾಗಲಿದೆ.
ಐಸಿಸಿ ಮಂಡಳಿಯು ಭಾನುವಾರ( ಎ.13) ಹರಾರೆಯಲ್ಲಿ ಈ ವಿಷಯದ ಕುರಿತು ತಜ್ಞ ಚಿಂತನೆ ನಡೆಸಲಿದೆ.
ಪ್ರಸ್ತುತ ಏಕದಿನ ಪಂದ್ಯಗಳಲ್ಲಿ ಎರಡು ಎಂಡ್ ಗಳಿಂದ ಬೌಲಿಂಗ್ ಮಾಡುವ ಬೌಲರ್ ಗಳು ಪ್ರತ್ಯೇಕ ಹೊಸ ಚೆಂಡನ್ನು ಬಳಸುತ್ತಾರೆ. ಇದರಿಂದ ಚೆಂಡು ತನ್ನ ಹೊಳಪು ಕಾಯ್ದಿರಿಸಿಕೊಂಡು ಬ್ಯಾಟರುಗಳಿಗೆ ಸರಾಗ ರನ್ ಗಳಿಕೆಗೆ ಅನುಕೂಲವಾಗುತ್ತಿದೆ.
ಕ್ಷೇತ್ರ ರಕ್ಷಣೆಗೂ ಮಿತಿ ಇರುವುದರಿಂದ ಮೈದಾನದ ನಾನಾ ದಿಕ್ಕಿಗೆ ಚೆಂಡನ್ನು ಹೊಡೆದಟ್ಟಲು ಪೂರಕವಾಗುತ್ತಿದೆ. ಈ ಸಂದರ್ಭ ವೇಗದ ಬೌಲರ್ ಗಳಿಗೆ ರಿವರ್ಸ್ ಸ್ವಿಂಗ್ ಮಾಡಲೂ ಕಷ್ಟವಾಗುತ್ತದೆ. ಚೆಂಡು ರಿವರ್ಸ್ ಸ್ವಿಂಗ್ ಪಡೆಯಬೇಕಿದ್ದರೆ ಕನಿಷ್ಟ 35ಓವರ್ ಎಸೆದಿರಲೇ ಬೇಕಾಗುತ್ತದೆ. ಹೊಸ ಚೆಂಡಿನಲ್ಲಿ ಈ ಪ್ರಯೋಗ ನಡೆಯುವುದೇ ಇಲ್ಲ. ಆದ್ದರಿಂದ ಚೆಂಡು ಬಳಕೆಯ ವಿಧಾನದ ಪರಿಷ್ಕರಣೆ ಮತ್ತು ಬೌಲರ್ ಗಳಿಗೂ ಸಮಾನ ಪ್ರಾಶಸ್ತ್ಯ ನೀಡಲು ಐಸಿಸಿ ನಿರ್ಣಯಿಸಿದೆ. ಅಲ್ಲದೇ ಕ್ರಿಕೆಟಿನಲ್ಲಿ ಇತರ ಮೂರು ನಿಯಮ ಬದಲಾವಣೆಗೂ ಐಸಿಸಿ ಮುಂದಾಗಿದೆ. ಟೆಸ್ಟ್ ಪಂದ್ಯದಲ್ಲಿ ಓವರ್ ಗಳ ನಡುವೆ ಕೇವಲ ಕೇವಲ ಒಂದು ನಿಮಿಷದ ಬಿಡುವು, ಅದಕ್ಕೆ ಟೈಮರ್, ಇದರಿಂದ ನಿಗದಿತ ಅವಧಿಯಲ್ಲಿ 90ಓವರ್ ಎಸೆದು ಮುಗಿಸಲು ಸಾಧ್ಯ ಎಂಬುದು ಬಿಸಿಸಿಐ ಕಲ್ಪನೆ.
ಹೀಗೆಯೇ ಅಂಡರ್ -19 ವಿಶ್ವಕಪ್ ಕ್ರಿಕೆಟನ್ನು 50ಓವರ್ ಮ್ಯಾಚ್ ಬದಲಿಗೆ ಟಿ20ಮಾದರಿಯಲ್ಲಿ ನಡೆಸಲೂ ಐಸಿಸಿ ಯೋಚಿಸಿದೆ. 50ಓವರುಗಳ ಆಟ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬ ಲೆಕ್ಕಾಚಾರಕ್ಕೆ ಬಿಸಿಸಿಐ ಬಂದಿದ್ದು, ಆದ್ದರಿಂದಲೇ ಆಟದ ಕ್ರಮದ ಪರಿಷ್ಕಾರ ಚಿಂತನೆ ನಡೆದಿದೆ.
ದೇಶದ ಅತೀ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳು ಯೋಗ್ಯ, ಅರ್ಹರಿಗೆ ದೊರೆಯಬೇಕೇ..??
ನಾಗರಿಕರಿಗೂ ಯೋಗ್ಯರನ್ನು ಶಿಫಾರಸು ಮಾಡಲು ಅವಕಾಶಗಳಿವೆ..
ದೆಹಲಿ: 2026ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮತ್ತು ಶಿಫಾರಸು ಪ್ರಕ್ರಿಯೆಯನ್ನು ಕೇಂದ್ರ ಗೃಹಸಚಿವಾಲಯ ಪ್ರಾರಂಭಿಸಿದೆ.
ಪದ್ಮಪ್ರಶಸ್ತಿಗಳಿಗೆ ನಾಮನಿರ್ದೇಶನಗಳು ಮತ್ತು ಶಿಫಾರಸುಗಳನ್ನು ಸಲ್ಲಿಸಲು 2025ರ ಜುಲೈ 31ಅಂತಿಮ ದಿನವಾಗಿದೆ. ಸಾರ್ವಜನಿಕರ ನಾಮನಿರ್ದೇಶನ ಮತ್ತು ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (http:/awards.in) ಮೂಲಕ ಸ್ವೀಕರಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಕ್ಕೆ ಆಯ್ಕೆಗೊಂಡವರನ್ನು ಗಣರಾಜ್ಯೋತ್ಸವ ಮುನ್ನಾ ದಿನದಿನ ಘೋಷಿಸಲಾಗುತ್ತದೆ.