ಕಾಸರಗೋಡಿನಲ್ಲಿ ‘ ಶೖಕ್ಷಣಿಕ ಸದನ ಸ್ಥಾಪಿಸಲು ಶಿಕ್ಷಣ ಸಚಿವ ಎನ್. ಸಂಶುದ್ದೀನ್ ರಿಗೆ ಕೆಎಸ್ ಟಿಯು ಮನವಿ

by Narayan Chambaltimar

ಕಾಸರಗೋಡು: ಜಿಲ್ಲೆಯ ಶಿಕ್ಷಕರ ಬಹುಕಾಲದ ಅಗತ್ಯವಾಗಿರುವ ಶಿಕ್ಷಕ ಸದನ’*ವನ್ನು ಕಾಸರಗೋಡಿನಲ್ಲಿ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್‌ಟಿಯು ನಿಯೋಗವು ಶಿಕ್ಷಣ ಸಚಿವ ಅಡ್ವ. ಎನ್. ಶಂಸುದ್ದೀನ್ ಅವರಿಗೆ ಮನವಿ ಸಲ್ಲಿಸಿತು.

ಕಾಸರಗೋಡಿಗೆ ವಿವಿಧ ಭಾಗಗಳಿಂದ ಆಗಮಿಸುವ ಶಿಕ್ಷಕರಿಗೆ ತರಬೇತಿ, ಸಭೆ, ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ವಸತಿ ಸೇರಿದಂತೆ ವಿವಿಧ ಅಗತ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಿಕ್ಷಕ ಸದನವನ್ನು ಸ್ಥಾಪಿಸುವುದು ಅತ್ಯಂತ ಉಪಯುಕ್ತವಾಗಲಿದೆ. ಶಿಕ್ಷಕರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒಂದೇ ಕಡೆ ಒದಗಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ನಿಯೋಗ ತಿಳಿಸಿತು.
ಶಿಕ್ಷಕರ ಹಿತಾಸಕ್ತಿಯನ್ನು ಪರಿಗಣಿಸಿ ಕಾಸರಗೋಡಿನಲ್ಲಿ ಶಿಕ್ಷಕ ಸದನ ಸ್ಥಾಪಿಸುವ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.
ಯಾಸಿರ್ ಅರಾಫತ್, ಶೌಕತ್ ಅಲಿ, ಯೂನುಸ್, ಆಶ್ರಫ್ ಮರ್ತ್ಯ ಮೊದಲಾದವರು ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00