ಚುನಾವಣೆಗೊಂದೇ ದಿನ ಬಾಕಿ ಇರುವಂತೆಯೇ ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾದ ಮುಸ್ಲಿಂ ಲೀಗ್ ಅಭ್ಯರ್ಥಿ!

by Narayan Chambaltimar
  • ಜಿದ್ದಾ ಜಿದ್ದಿನ ಗ್ರಾ. ಪಂ. ಚುನಾವಣೆ ನಡುವೆ ಒಂದು ಅನ್ಯ ಮತೀಯ ಪ್ರೇಮ ಕಹಾನಿ!

ಕಾಸರಗೋಡು : ಸ್ಥಳೀಯಾಡಳಿತ ಚುನಾವಣೆಗೆ ಇನ್ನೊಂದು ದಿನವಷ್ಟೇ ಉಳಿದಿರುವಾಗ ಯು. ಡಿ. ಎಫ್ ನ ಮುಸ್ಲಿಂ ಲೀಗ್ ಅಭ್ಯರ್ಥಿಯೊಬ್ಬಳು ಬಿಜೆಪಿ ಕಾರ್ಯಕರ್ತನ ಜತೆ ಪರಾರಿಯಾಗಿ ನಾಪತ್ತೆಯಾದ ಘಟನೆ ವರದಿಯಾಗಿದೆ.
ಕಣ್ಣೂರು ಚೋಕ್ಲಿ ಗ್ರಾಮ ಪಂ. ನಲ್ಲಿ ಈ ಘಟನೆ ನಡೆದಿದ್ದು, ನಾಪತ್ತೆಯಾದ ಅಭ್ಯರ್ಥಿ ಮೆಜಿಸ್ಟ್ರೇಟ್ ಮುಂಭಾಗ ಹಾಜರಾಗಿದ್ದು ಬಳಿಕ ಪ್ರಿಯತಮನೊಡನೆ ಮರಳಿದಳು.

ಕಣ್ಣೂರಿನ ಚೋಕ್ಲಿ ಗ್ರಾ. ಪಂ. ನ 9ನೇ ವಾರ್ಡಿನ ಮುಸ್ಲಿಂಲೀಗ್ ಅಭ್ಯರ್ಥಿಯಾದ ಟಿ. ಪಿ. ಅರುವ (29)ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಚುನಾವಣಾ ಕಣದಲ್ಲಿ ಸಕ್ರಿಯವಾಗಿ ಗೃಹ ಸಂಪರ್ಕ ನಡೆಸಿ ಮತದಾರರನ್ನು ಖುದ್ದು ಭೇಟಿಯಾಗುತ್ತಿದ್ದ ಇವರು ಪ್ರಬಲ ಸ್ಪರ್ಧೆ ಒಡ್ಡಿದ್ದರು. ಈ ಮಧ್ಯೆ ದಿಢೀರ್ ಅಭ್ಯರ್ಥಿಯೇ ನಾಪತ್ತೆಯಾದಾಗ ಈಕೆಯನ್ನು ಸಿಪಿಎಂ ನವರು ಅಪಹರಿಸಿ ದಿಗ್ಬಂಧನದಲ್ಲಿಟ್ಟಿದ್ದಾರೆಂದು ಆರೋಪಿಸಿ ಯುಡಿಎಫ್ ರಂಗಕ್ಕಿಳಿದಿತ್ತು. ಈ ಸಂಬಂಧ ಈಕೆಯ ತಾಯಿ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಘಟನೆಯಲ್ಲಿ ತಮಗೆ ಯಾವುದೇ ನಂಟಿಲ್ಲವೆಂದು ಸಿಪಿಐಎಂ ಸ್ಪಷ್ಟನೆ ನೀಡಿತ್ತು.
ಈ ನಡುವೆ ಪೊಲೀಸರು ತನಿಖೆ ನಡೆಸುವಾಗ ಪ್ರಕರಣಕ್ಕೆ ಟ್ವಿಸ್ಟ್ ಆಗಿದ್ದು, ಆಕೆ ಸಕ್ರಿಯ ಬಿಜೆಪಿ ಕಾರ್ಯಕರ್ತ ನಾದ ಗೆಳೆಯನೊಂದಿಗೆ ತೆರಳಿರುವುದಾಗಿ ತಿಳಿದುಬಂತು. ಇದರಂತೆ ಇಂದು ಅಪರಾಹ್ನ ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00