142
ಕಾಸರಗೋಡು: ಆಟೋ ರಿಕ್ಷಾ ಚಲಾಯಿಸುತ್ತಿರುವಂತೆಯೇ ಚಾಲಕನ ಹೆಗಲ ಮೇಲೆ ಗೂಬೆಯೊಂದು ಹಾರಿ ಬಂದು ಕುಳಿತಿತು. ಕಕ್ಕಾಬಿಕ್ಕಿಯಾದ ಚಾಲಕನ ದಿಗ್ಭ್ರಮೆಯಿಂದ ರಿಕ್ಷಾ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿಯಿತು. ಸೋಮವಾರ ರಾತ್ರಿ ಎಂಟೂವರೆ ಗಂಟೆ ವೇಳೆಗೆ ಚಟ್ಟಂಚಾಲ್ -ದೇಳಿ ರಸ್ತೆಯ ಬಂಡಿಚ್ಚಾಲ್ ನಲ್ಲಿ ಈ ಘಟನೆ ನಡೆದಿದೆ. ಗಾಯಾಳು ಚಾಲಕ ತಳಂಗರೆ ನಿವಾಸಿ ಯೂಸುಫ್ (50) ಚೇತರಿಸಿದ್ದಾರೆ.
ಕಾಸರಗೋಡಿನಿಂದ ಬಂಡಿಚ್ಚಾಲ್ ಗೆ ಪ್ರಯಾಣಿಕರೊಬ್ಬರನ್ನು ಬಿಟ್ಟು ಮರಳುವ ದಾರಿ ಮಧ್ಯೆ ಈ ಘಟನೆ ಸಂಭವಿಸಿದೆ. ಗೂಬೆ ಹೆಗಲಲ್ಲಿ ಕುಳಿತಾಗ ಉಂಟಾದ ವಿಭ್ರಾಂತಿಯಿಂದ ಆಟೋ ವಿದ್ಯುತ್ ಕಂಬಕ್ಕೆ ಬಡಿದಿದ್ದು, ಅದರ ಮುಂಭಾಗ ನಜ್ಜುಗುಜ್ಜಾಗಿದೆ.








