70
ಬೆಳ್ಳೂರು : ಇಲ್ಲಿನ ಕಕ್ಕೆಬೆಟ್ಟು ಬಳಿಯ ಗುತ್ಯಡ್ಕ ನಿವಾಸಿ ನಾರಾಯಣ (75)ಎಂಬವರು ನಿಧನರಾದರು. ಕಳೆದ ಅನೇಕ ಕಾಲದಿಂದ ಬಡಗಿ ವೃತ್ತಿಯಲ್ಲಿದ್ದ ಅವರು ಶಾರೀರಿಕ ಅಸೌಖ್ಯದಿಂದ ಬಳಲಿ ಮಂಗಳವಾರ ಮಧ್ಯಾಹ್ನ ಅಸುನೀಗಿದರು.
ಇವರು ಪತ್ನಿ ರತ್ನಾ, ಮಕ್ಕಳಾದ ರಾಜೇಶ, ಶಾಲಿನಿ, ಮಾಲಿನಿ, ಚೇತನಾ ಎಂಬಿವರನ್ನಗಲಿದ್ದಾರೆ. ಬೆಳ್ಳೂರು ಗ್ರಾ. ಪಂ. ಉಪಾಧ್ಯಕ್ಷೆಯಾಗಿದ್ದು, ಈ ಬಾರಿ ಪಕ್ಷೇತರಳಾಗಿ ಸ್ಪರ್ಧಿಸುವ ಗೀತಾ ಅವರಿಗೆ ಮೃತರು ಸಂಬಂಧಿಕರಾಗಿದ್ದು, ಅಗಲಿಕೆಗೆ ಅವರು ಸಂತಾಪ ಪ್ರಕಟಿಸಿದ್ದಾರೆ.








