ನಾಳೆ ಕುಂಬಳೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಆಗಮನ

by Narayan Chambaltimar

ಮಂಜೇಶ್ವರ ಮಂಡಲ ವಿಧಾನಸಭಾ ಕ್ಷೇತ್ರ ಯುಡಿಎಫ್ ಅಭ್ಯರ್ಥಿ ಸಂಗಮದಲ್ಲಿ ಭಾಗಿ

ಕುಂಬಳೆ : ಎಐಸಿಸಿ ಪ್ರಧಾನ ಕಾರ್ಯದರ್ಶಿ
ಕೆ.ಸಿ ವೇಣುಗೋಪಾಲ್ ಡಿ.3 ರಂದು ಕುಂಬಳೆಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 2 ಗಂಟೆಗೆ ಕುಂಬಳೆ ರಾಯಲ್ ಕ್ಯೂಬ ಡೈನ್ ರೆಸ್ಟೋರೆಂಟ್ ನಲ್ಲಿನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಆಭ್ಯರ್ಥಿಗಳ ಸಭೆಯಲ್ಲಿ ಭಾಗವಹಿಸುವ ವೇಣುಗೋಪಾಲ್ ಆವರು, ಬಳಿಕ 3 ಗಂಟೆಗೆ ಕುಂಬಳೆ ಪೇಟೆಯಲ್ಲಿಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

ಸ್ಥಳೀಯಾಡಳಿತ ಚುನಾವಣಾ ಪೂರ್ವಭಾವಿ ಅಭ್ಯರ್ಥಿಗಳನ್ನು ಮತ್ತು ಕಾರ್ಯಕರ್ತರನ್ನು ಹುರಿದುಂಬಿಸುವ ಪಕ್ಷದ ಕಾರ್ಯಯೋಜನೆಯಂತೆ ಕೆ. ಸಿ. ಆಗಮಿಸುತ್ತಿರುವುದಾಗಿ ಹೇಳಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00