ಅಡೂರಿನ ಪಾಳು ಬಾವಿಗೆ ಬಿದ್ದು ಚಿರತೆ ಸಾವು..

by Narayan Chambaltimar

ಕಾಸರಗೋಡಿನ ಅಡೂರಿನಲ್ಲಿ ಉಪಯೋಗಶೂನ್ಯ ಪಾಳು ಬಾವಿಯಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಅಡೂರು ತಲ್ಪಚ್ಚೇರಿಯ ಮೋಹನ ಎಂಬವರ ಬಾವಿಯಲ್ಲಿ ಚಿರತೆಯು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮನೆ ಪರಿಸರದಲ್ಲಿ ದುರ್ಗಂಧ ಹರಡಲಾರಂಭಿಸಿದ ಹಿನ್ನೆಲೆಯಲ್ಲಿ ತಪಾಸಿಸಿದಾಗ ಪಾಳು ಬಾವಿಯಲ್ಲಿ ಚಿರತೆ ತೇಲುವುದು ಕಂಡುಬಂತು. ಈ ಕುರಿತು ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಸ್ಥಳ ಸಂದರ್ಶಿಸಿದ್ದಾರೆ.
ಕಾಸರಗೋಡಿನ ಅರಣ್ಯ ಪ್ರದೇಶ ಹೊಂದಿಕೊಂಡ ನಾಡಿನಲ್ಲಿ ಇತ್ತೀಚೆಗೆ ಚಿರತೆ ಕಾಟ ಹೆಚ್ಚಾಗಿದೆ. ಅಡೂರಿನ ತಲ್ಪಚ್ಚೇರಿ ಬಳಿಯಲ್ಲಿ ಇತ್ತೀಚೆಗೆ ಕಾಡಾನೆಗಳೆರಡು ಕಾದಾಡಿ ಒಂದು ಕಾಡಾನೆ ಮೃತಪಟ್ಟಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00