ಪುತ್ತಿಗೆ ದೇಲಂಪಾಡಿ ದೇವಳದಲ್ಲಿ ಧನುಪೂಜಾ ಸಂಭ್ರಮ : ಉದ್ಯಮಿಗೆ ಸನ್ಮಾನ

by Narayan Chambaltimar
  • ದೇಲಂಪಾಡಿ ಕ್ಷೇತ್ರ ಧನುಪೂಜೆ – ಧಾರ್ಮಿಕ ಸಭೆ – ಸನ್ಮಾನ
    ಪೆರ್ಲ : ಅಂಗಡಿಮೊಗರು ಸಮೀಪದ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಧನುಪೂಜಾ ಮಹೋತ್ಸವದಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.

ಸೇವಾ ಸಮಿತಿ ಅಧ್ಯಕ್ಷ ಡಿ.ದಾಮೋದರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಜೀರ್ಣೋದ್ಧಾರ ಕಾಮಗಾರಿಗೆ ಧನ ಸಹಾಯ ನೀಡಿದ ಕೊಡುಗೈ ದಾನಿ ಮಂಗಳೂರಿನ ಎಸ್.ಎಲ್.ಶೇಟ್ ಜ್ಯುವೆಲ್ಲರಿಯ ಮಾಲಕರಾದ ರವೀಂದ್ರ ಶೇಟ್ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಪುತ್ತಿಗೆ ಗ್ರಾ.ಪಂ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ,
ನ್ಯಾಯವಾದಿ ಸತೀಶ್ ಕೊಟೆಕಣಿ,ಮಾಜಿ ಪಂ.ಉಪಾಧ್ಯಕ್ಷ ಜಯಂತ ಪಾಟಾಳಿ, ಚಿದಾನಂದ ಆಳ್ವ, ದೇವದಾಸ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು.ಜೀರ್ಣೋದ್ಧಾರ ಕಾರ್ಯಕ್ಕೆ ಧನ ಸಹಾಯ ನೀಡಿದ ದಾನಿಗಳಿಗೆ ಕೃತಜ್ಞತ ಪತ್ರ ವಿತರಿಸಲಾಯಿತು. ಆಶೋಕ್ ಅರಿಯಪ್ಪಾಡಿ ನೇತೃತ್ವದಲ್ಲಿ ಭಕ್ತಿ ಸಂಕೀರ್ತನೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ‌ಡಿ.ರಾಜೇಂದ್ರ ರೈ ಸ್ವಾಗತಿಸಿ ನಿರೂಪಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00