ಎನ್.ಐ.ಎ.ಧಾಳಿ : ಅಸ್ಸಾಂನಿಂದ ತಲೆಮರೆಸಿದ ಉಗ್ರ ನೀಲೇಶ್ವರ ಬಳಿ ಸೆರೆ

by Narayan Chambaltimar

ಎನ್.ಐ.ಎ.ಧಾಳಿ : ಅಸ್ಸಾಂನಿಂದ ತಲೆಮರೆಸಿದ ಉಗ್ರ ನೀಲೇಶ್ವರ ಬಳಿ ಸೆರೆ

ಕಾಸರಗೋಡು: ಬಾಂಗ್ಲಾದೇಶದ ಪೌರನೆಂದು ಶಂಕಿಸಲಾಗುವ ಅಸ್ಸಾಂ ನ ಉಗ್ರಗಾಮಿ ಕೇಸಿನಲ್ಲಿ ಎನ್.ಐ.ಎ ಹುಡುಕಾಡುತ್ತಿದ್ದ ತಲೆಮರೆಸಿಕೊಂಡ ಉಗ್ರನೊಬ್ಬನನ್ನು ಕಾಸರಗೋಡು ಜಿಲ್ಲೆಯ ನೀಲೇಶ್ವರದ ಪಡನ್ನಕಾಡ್ ನಿಂದ ಬಂಧಿಸಲಾಗಿದೆ. ಇಂದು ಬೆಳಿಗ್ಗೆ ಎನ್.ಐ.ಎ ನಡೆಸಿದ ಧಾಳಿಯಲ್ಲಿ ಬಂಧನ ಕಾರ್ಯಾಚರಣೆ ಯಶಸ್ವಿಯಾಯಿತು.

 

ಬಂಧಿತನನ್ನು ಎಂ.ಬಿ. ಶಾಬ್ ಶೇಖ್ (34)ಎಂದು ಹೆಸರಿಸಲಾಗಿದೆ. ಅಸ್ಸಾಂನಲ್ಲಿ ನಡೆದ ಉಗ್ರಗಾಮಿ ಕೃತ್ಯದಲ್ಲಿ ಈತನ ವಿರುದ್ಧ UAPA ಕಾಯ್ದೆಯಂತೆ ಕೇಸು ದಾಖಲಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಲುಕೌಟ್ ನೋಟೀಸು ಪ್ರಕಟಿಸಲಾಗಿತ್ತು. ಈ ಮಧ್ಯೆ ಈತ ಸುರಕ್ಷಿತ ನೆಲೆ ಅರಸಿ ಕೇರಳಕ್ಕೆ ಬಂದಿರುವನೆಂಬ ಶಂಕೆ ಹಿನ್ನೆಲೆಯಲ್ಲಿ ಹುಡುಕಾಟ ನಡೆಯುತ್ತಿರುವಾಗ ಪಡನ್ನಕ್ಕಾಡ್ ನಲ್ಲಿ ಈತ ಪತ್ತೆಯಾದನು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00