ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣ : ನಟ ಅಲ್ಲೂ ಅರ್ಜುನ್ ಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

by Narayan Chambaltimar

ಕಾಲ್ತುಳಿತದಿಂದ ಮಹಿಳೆ ಸಾವು ಪ್ರಕರಣ : ನಟ ಅಲ್ಲೂ ಅರ್ಜುನ್ ಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಯಾದ ಪುಷ್ಪ -2 ಸಿನಿಮ ಭಾರತೀಯ ಚಿತ್ರರಂಗದಲ್ಲೇ ಗಳಿಕೆಯ ದಾಖಲೆ ನಿರ್ಮಿಸಿ ನೆಗೆದೋಡುತ್ತಿದ್ದರೆ ಚಿತ್ರದ ನಾಯಕ ನಟ ಅಲ್ಲೂ ಅರ್ಜುನ್ ಜೈಲು ಕಂಬಿ ಎಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪುಷ್ಪ -2 ಬಿಡುಗಡೆಯಂದು ಪ್ರೀಮಿಯರ್ ಷೋ ನೋಡಲು ಬಂದಿದ್ದ,ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ಹೈದರಾಬಾದ್ ಪೋಲೀಸರು ತೆಲುಗು ಸೂಪರ್ ಸ್ಟಾರ್ ಅಲ್ಲೂ ಅರ್ಜುನ್ ನನ್ನು ಬಂಧಿಸಿದ್ದಾರೆ. ಬಳಿಕ ಅವರನ್ನು ನಂಬಪಳ್ಳಿ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯ ಬಂಧಿತ ನಟನಿಗೆ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧನದ ವಿರುದ್ಧ ನಟ ಸಲ್ಲಿಸಿದ ಮನವಿಯನ್ನು ತೆಲಂಗಾನ ಹೈಕೋರ್ಟು ಪರಿಶೀಲಿಸಲಿದೆ. ಹೈಕೋರ್ಟಿನ ತೀರ್ಮಾನದ ಬಳಿಕವೇ ಅಲ್ಲು ಅರ್ಜುನ್ ರನ್ನು ಜೈಲಿನಲ್ಲಿರಿಸುವುದರ ಅಂತಿಮ ನಿರ್ಣಯವಾಗಲಿದೆ.

ಪುಷ್ಪ -2 ಸಿನಿಮಾದ ಪ್ರೀಮಿಯರ್ ಷೋ ದಿನದಂದು ನಟ ಅಲ್ಲೂಅರ್ಜುನ್ ಸಿನಿಮಾ ಮಂದಿರಕ್ಕೆ ಆಗಮಿಸುತ್ತಾರೆಂಬ ವದಂತಿ ಹರಡಿ ಜನ ಜಮಾವಣೆಯಾಗಿ ಕಾಲ್ತುಳಿತ ಸಂಭವಿಸಿತ್ತು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00