ಶಬರಿಮಲೆಯ ಹದಿನೆಂಟು ಮೆಟ್ಟಲೇರಿ ಫೋಟೋ ಶೂಟ್ ನಡೆಸಿದ ಪೋಲೀಸರಿಗೆ ಉತ್ತಮ ನಡೆತೆಗಾಗಿ ಶಿಕ್ಷಾವಿಧೇಯ ತರಬೇತಿ

by Narayan Chambaltimar
  • ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಪವಿತ್ರ 18ಮೆಟ್ಟಿಲುಗಳ ಮೇಲೆ ಅಯ್ಯಪ್ಪ ಪ್ರತಿಷ್ಠೆಗೆ ಬೆನ್ನು ಹಾಕಿ ಫೋಟೋ ಶೂಟ್ ನಡೆಸಿದ ಪೋಲೀಸರನ್ನು ಶಿಕ್ಷಾವಿಧೇಯವಾಗಿ ಶಬರಿಮಲೆ ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ ಮತ್ತು ಅವರನ್ನು ಉತ್ತಮನಡತೆಗಾಗಿ ತೀವ್ರ ತರಬೇತಿಗಾಗಿ ಕಣ್ಣೂರು ಮೀಸಲು ಪಡೆಯ ಕೇಂದ್ರಕ್ಕೆ ಕಳುಹಿಸಲಾಗಿದೆ.

ಎಸ್ಎಪಿ ಕ್ಯಾಂಪಿನ 23ಮಂದಿ ಪೋಲೀಸರನ್ನು ಶಿಕ್ಷಾ ವಿಧೇಯ ಉತ್ತಮನಡತೆಯ ತರಬೇತಿಗೆ ಕಳುಹಿಸಲಾಗಿದೆ.
ಈ ಕುರಿತು ಎಡಿಜಿಪಿ ಅವರ ಅಂತಿಮ ನಿರ್ಣಯ ಇಂದು ಉಂಟಾಗಲಿದೆ.

ಇದೇ ವೇಳೆ ಹದಿನೆಂಟನೇ ಮೆಟ್ಟಲೇರಿ ನಿಂತು ಪೋಲೀಸರೇ ಫೋಟೋ ತೆಗೆದದ್ದು ಅಕ್ಷಮ್ಯ ಎಂದು ಶಬರಿಮಲೆ ತಂತ್ರಿ ಕಂಠರರ್ ಮೋಹನರ್ ಹೇಳಿದ್ದಾರೆ. ಶಬರಿಮಲೆ ಸನ್ನಿಧಾನ ಟೂರಿಸಂ ಕೇಂದ್ರವಲ್ಲ, ಅಲ್ಲಿ ಯಾರೂ ಫೋಟೋ ತೆಗೆಯಕೂಡದು. ಈ ಕುರಿತು ಹೈಕೋರ್ಟು ಆದೇಶವನ್ನು ಸ್ವಾಗತಿಸಿದ ಅವರು ಹದಿನೆಂಟು ಮೆಟ್ಟಿಲೆಂದರೆ ಭಕ್ತರೆಲ್ಲರ ಪರಿಶುದ್ಧ ಭಾವನೆಗಳಿರುವ ಆರಾಧನಾ ಮೆಟ್ಟಿಲುಗಳು. ಶಬರಿಮಲೆ ಕರ್ತವ್ಯಕ್ಕೆ ನಿಯುಕ್ತರಾಗುವ ಪೋಲೀಸರಿಗೆ ಈ ಅರಿವು ಇರಬೇಕು ಎಂದವರು ಹೇಳಿದರು.
ಸೋಮವಾರದಂದು ಕರ್ತವ್ಯದಲ್ಲಿದ್ದ ಪೋಲೀಸರು ನಡೆಮುಚ್ಚಿದ ಬಳಿಕ ಹದಿನೆಂಟು ಮೆಟ್ಟಿಲುಗಳಲ್ಲಿ ನಿಂತು ಫೋಟೋ ತೆಗೆದಿದ್ದರು. ಈ ಫೋಟೋ ಜಾಲತಾಣಗಳಲ್ಲಿ ಹರಿದಾಡಿದಾಗ ಹಿಂದೂ ಸಂಘಟನೆಗಳು ಪ್ರತಿಭಟಿಸಿದ್ದವು. ಬಳಿಕ ಏಡಿಜಿಪಿ ಈ ಕುರಿತು ವರದಿ ಕೋರಿದ್ದರು. ಈ ತನ್ಮಧ್ಯೆ ಕರ್ತವ್ಯ ನಿರತರಾಗಿ ಫೋಟೋ ತೆಗೆದ ಪೋಲೀಸರನ್ನು ಉತ್ತಮ ನಡತೆಗಾಗಿ ವರ್ಗಾಯಿಸಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00