ಮಾನ್ಯ ಮಂದಿರ, ಎಡನೀರು ದೇವಳ ಕಳ್ಳತನಗೈದ ಮತ್ತೋರ್ವ ಕುಖ್ಯಾತ ಚೋರನ ಸೆರೆ

by Narayan Chambaltimar

ಮಾನ್ಯ ಅಯ್ಯಪ್ಪ ಮಂದಿರ, ಎಡನೀರು ವಿಷ್ಣುಮಂಗಲ ದೇವಸ್ಥಾನ ಸಹಿತ ಹಲವೆಡೆ ಇತ್ತೀಚೆಗೆ ನಡೆದ ಕಳ್ಳತನದಲ್ಲಿ ಭಾಗಿಯಾದ ಮತ್ತೋರ್ವ ಕುಖ್ಯಾತ ಚೋರನನ್ನು ಬಂಧಿಸಲಾಗಿದೆ.
ಉಳ್ಳಾಲ ದರ್ಗಾ ಸಮೀಪ ವಾಸಿಯಾದ ಮುಹಮ್ಮದ್ ಫೈಸಲ್ ಯಾನೆ ಫೈಸು (36)ಎಂಬಾತನನ್ನು ಕಾಸರಗೋಡು ನಗರದ ವಿದ್ಯಾನಗರ ಪೋಲೀಸ್ ನೇತೃತ್ವದಲ್ಲಿ ಬಂಧಿಸಲಾಯಿತು. ಈತನ ವಿರುದ್ಧ ಮಂಜೇಶ್ವರ, ಬದಿಯಡ್ಕ ಸೇರಿದಂತೆ ಹಲವು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ಪ್ರಕರಣಗಳಿವೆಯೆಂದು ಪೋಲೀಸರು ಹೇಳಿದ್ದಾರೆ

ಮಾನ್ಯ ಅಯ್ಯಪ್ಪ ಮಂದಿರದಿಂದ ಕಳ್ಳತನಗೈದು ಬಂಧಿತನಾದ ಪುತ್ತೂರು ಕಡಬ ಮೂಲದ ಇಬ್ರಾಹಿಂ ಕಲಂದರ್ ಎಂಬಾತನ ಸಹಚರನಾದ ಈತ ಮಾನ್ಯ ಅಯ್ಯಪ್ಪ ಮಂದಿರದಿಂದ ರಜತ ವಿಗ್ರಹ ಕದ್ದೊಯ್ದ ಪ್ರಕರಣ ಸಹಿತ ಕೆಲವು ಪ್ರಕರಣದಲ್ಲಿ ಪಾಲ್ಗೊಂಡವನೆಂದು ಪೋಲೀಸರು ತಿಳಿಸಿದ್ದಾರೆ.ಈತನಿಂದ ಕಳ್ಳತನಕ್ಕೆ ಬಳಸಿದ ನೀಲಿ ಬಣ್ಣದ ಆಲ್ಟೋ ಕಾರು ವಶಪಡಿಸಲಾಗಿದೆ..

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00