ಸಮಜ್ಞ ಆರ್ಟ್ಸ್ , ಸ್ಪೋರ್ಟ್ಸ್ & b ಐ ಫೌಂಡೇಶನ್ ಕಾಸರಗೋಡು ಹಾಗೂ ಯುನೈಟೆಡ್ ಮೆಡಿಕಲ್ ಸೆಂಟರ್ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರವು ನ.24 ರ ಆದಿತ್ಯವಾರ ಬೆದ್ರಡ್ಕದ ಕಂಬಾರು ಜಿ.ಎಲ್.ಪಿ. ಶಾಲೆ ಯಲ್ಲಿ ನಡೆಯಿತು
ಸಮಜ್ಞ ಆರ್ಟ್ಸ್ , ಸ್ಪೋರ್ಟ್ಸ್ & b ಐ ಫೌಂಡೇಶನ್ ಕಾಸರಗೋಡು ಹಾಗೂ ಯುನೈಟೆಡ್ ಮೆಡಿಕಲ್ ಸೆಂಟರ್ ಇವರಿಂದ ಉಚಿತ ನೇತ್ರ ತಪಾಸಣೆ ಹಾಗೂ ಆರೋಗ್ಯ ತಪಾಸಣೆ ಶಿಬಿರವು ನ.24 ರ ಆದಿತ್ಯವಾರ ಬೆದ್ರಡ್ಕದ ಕಂಬಾರು ಜಿ.ಎಲ್.ಪಿ. ಶಾಲೆ ಯಲ್ಲಿ ನಡೆಯಿತು ಕಾಸರಗೋಡು ಶಾಸಕ ಎನ್. ಎ ನೆಲ್ಲಿಕ್ಕುನ್ನು ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಟೆಸ್ಮಿ ಚಾಕೋ, ಡಾ. ಜೋಸೆಫ್ ವರ್ಕಿ, ಡಾ.ಶಿಫಾರ್ ಹಾಗೂ ಡಾ. ಹರ್ಷ , ಮುಂತಾದ ವೈದ್ಯರುಗಳು ಭಾಗವಸಿದ್ದರು. ಹಾಗೂ ಕಾಸರಗೋಡು ಜಿಲ್ಲೆಯ ಕಂದಾಯ ನಿರೀಕ್ಷಕರಾದ ಲೋಕೇಶ್ ಎಂ ಬಿ ಆಚಾರ್ ಜೊತೆಗೆ ಕೂಡ್ಲು ಗ್ರಾಮದ ಗ್ರಾಮಾಧಿಕಾರಿ ಜಯಪ್ರಕಾಶ್ ಆಚಾರ್ಯ ಎಂ. ಬಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕ್ಲಬ್ಬಿನ ಅಧ್ಯಕ್ಷರಾದ ಮಿಥುನ್ ಕುಮಾರ್ ಕೆ .ಎಲ್ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಕೆ.ಬಿ. ವರಪ್ರಸಾದ್ ಆಚಾರ್ಯ ಸ್ವಾಗತಗೈದು ಕಬ್ಬಿನ ಕಾರ್ಯದರ್ಶಿ ತೇಜಸ್ ಕುಮಾರ್ ಕೆ. ಎಲ್. ವಂದಿಸಿ , ಶರತ್ ಕೆ ಜೆ ಕಾರ್ಯಕ್ರಮವನ್ನು ನಿರೂಪಿಸಿದರು.