ಉದ್ಯೋಗ ಭರವಸೆಯಿಂದ ಲಕ್ಷಾಂತರ ಕಳಕೊಂಡು ಗೃಹಿಣಿಯ ಆತ್ಮಹತ್ಯೆ. ವಂಚನೆ ಎಸಗಿದ ಡಿಫಿ ನಾಯಕಿ ವಿರುದ್ಧ ಆತ್ಮಹತ್ಯಾ ಪ್ರಚೋದನೆ ಕೇಸು ದಾಖಲಿಸುವಂತೆ ಬಿಜೆಪಿ ಒ

by Narayan Chambaltimar

ಬದಿಯಡ್ಕ: ಡಿವೈಎಫ್ಐ ನಾಯಕಿ ಸಚಿತಾ ರೈಯಿಂದ ಉದ್ಯೋಗ ಕೊಡಿಸುವ ಭರವಸೆ ಪಡೆದು 15ಲಕ್ಷ ರೂ ಕಳಕೊಂಡು ವಂಚಿರಾಗಿ ಬಳಿಕ ಮನನೊಂದುಲ ಆತ್ಮಹತ್ಯೆಗೈದ ಪಳ್ಳತ್ತಡ್ಕ ನೆಲ್ಲಿಕಳಯ ನಿವಾಸಿ ಅರವಿಂದಾಕ್ಷರ ಪತ್ನಿ ಸರೋಜಿನಿ(50) ಆತ್ಮಹತ್ಯೆಗೈದ ಘಟನೆಯ ಹಿನ್ನೆಲೆಯಲ್ಲಿ ಪೋಲೀಸರು ಪ್ರಕರಣದ ಗಂಭೀರತೆ ಪರಿಗಣಿಸಿ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಬದಿಯಡ್ಕ ಮಂಡಲ ಸಮಿತಿ ಒತ್ತಾಯಿಸಿದೆ.

ಉದ್ಯೋಗ ಭರವಸೆಯೊಡ್ಡಿ 15ಲಕ್ಷ ರೂ ಪಡೆದು ವಂಚಿಸಿದ ಪ್ರಕರಣದಲ್ಲಿ ಮನನೊಂದು ಆತ್ಮಹತ್ಯೆಗೈದ ಸರೋಜಿನಿ

ಬಿಜೆಪಿ ನಾಯಕರ ನಿಯೋಗ ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿದ ಸರೋಜಿನಿ ಅವರ ಮನೆ ಸಂದರ್ಶಿಸಿ, ಪ್ರಕರಣದಲ್ಲಿ ವಂಚನೆ ಎಸಗಿ, ಗೃಹಿಣಿಯ ಮನನೋಯಿಸಿದ ಸಚಿತಾ ರೈ ವಿರುದ್ಧ ಆತ್ಮಹತ್ಯಾ ಪ್ರಚೋದನೆಯ ನರಹತ್ಯಾ ಕೇಸು ದಾಖಲಿಸಬೇಕೆಂದು ಒತ್ತಾಯಿಸಿದೆ. ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಮುಂಡೋಳು ಈ ಸಂಬಂಧ ಹೇಳಿಕೆ ನೀಡಿದ್ದು ಈ ಪ್ರಕರಣದಲ್ಲಿ ಆತ್ಮಹತ್ಯೆ ಪ್ರೇರಣೆಯ ಕೇಸಿನ ಹೊರತಾಗಿ, ವಂಚನೆಗೊಳಗಾದ ಮತ್ತು ಆತ್ಮಹತ್ಯೆಗೈದ ಗೃಹಿಣಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಪೋಲೀಸರನ್ನು ಒತ್ತಾಯಿಸಿದ್ದಾರೆ.

ಮೃತ ಮಹಿಳೆಯ ಹಿರಿಯ ಪುತ್ರಿ ಅಮೃತಾಳಿಗೆ ಕಾಸರಗೋಡಿನ ಸಿಪಿಸಿಆರ್ ಐ ಯಲ್ಲಿ ಉದ್ಯೋಗ ಕೊಡಿಸುವ ಭರವಸೆಯಿತ್ತು 15ಲಕ್ಷದಷ್ಟು ಮೊತ್ತದ ಹಣ ಪಡೆದು ವಂಚಿಸಲಾಗಿತ್ತು. ಬಡವರಾದ ಇವರು ಉದ್ಯೋಗದ ಕನಸಿನಲ್ಲಿ ಹೇಗೋ ಹಣ ಹೊಂದಿಸಿ ಕೊಟ್ಟು ಮೋಸ ಹೋಗಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎಂ, ಪ್ರ.ಕಾರ್ಯದರ್ಶಿ ರವೀಂದ್ರ ಗೋಸಾಡ, ಪಿ.ಆರ್. ಸುನಿಲ್, ಬದಿಯಡ್ಕ ವಲಯ ಪ್ರ.ಕಾರ್ಯದರ್ಶಿ ಅವಿನಾಶ್ ರೈ,.ಆರೆಸ್ಸೆಸ್ ನ ಪ್ರಸಾದ್ ಓಂತಿಚ್ಚಾಲು, ವಾರ್ಡು ಸದಸ್ಯ ಈಶ್ವರ ಮಾಸ್ಟರ್ ಮೊದಲಾದವರು ಮೃತರ ಮನೆಗೆ ತೆರಳಿ ಕುಟುಂಬವನ್ನು ಸಂತೈಸಿದರು

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00