ಕುಂಟಿಕಾನ ಮಠದ ಸತೀಬದಿಯಡ್ಕ: ಕಾಸರಗೋಡು ಜಿಲ್ಲೆಯ ನೀರ್ಚಾಲು ಕುಂಟಿಕಾನ ಮಠದ ಸತೀಶ ಕೆ.ಎಂ. ಎನ್‌ಸಿಸಿ ಲೆಫ್ಟಿನೆಂಟ್ ಪದವಿ ಪಡೆದರು.ಶ ಕೆ.ಎಂ.ಗೆ ಅವರಿಗೆ ಎನ್‌ಸಿಸಿ ಲೆಫ್ಟಿನೆಂಟ್ ಪದವಿ

by Narayan Chambaltimar

ಬದಿಯಡ್ಕ: ಕಾಸರಗೋಡು ಜಿಲ್ಲೆಯ ನೀರ್ಚಾಲು ಕುಂಟಿಕಾನ ಮಠದ ಸತೀಶ ಕೆ.ಎಂ. ಎನ್‌ಸಿಸಿ ಲೆಫ್ಟಿನೆಂಟ್ ಪದವಿ ಪಡೆದರು.

ಭಾರತ ರಕ್ಷಣಾ ಸಚಿವಾಲಯದ ಅಧೀನದಲ್ಲಿ ಬರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್.ಸಿ.ಸಿ.) ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ, ಕಾಂಪ್ಟಿ, ನಾಗಪುರ್, ಮಹಾರಾಷ್ಟ ಇಲ್ಲಿ 3 ತಿಂಗಳುಗಳ ಕಾಲ ಫ್ರೀ ಕಮಿಷನ್ ಕೋರ್ಸ್ (ಎಸ್‌ಡಿ 173)ನ್ನು ಪೂರೈಸಿರುತ್ತಾರೆ. ಎನ್‌ಸಿಸಿ ನಿಯಮ 1948 ಉಪವಿಧಿ 21(5)ರ ಅಡಿಯಲ್ಲಿ ಸತೀಷ ಕೆ.ಎಂ. ಇವರು ಅಕ್ಟೋಬರ್ 14ರಂದು ಲೆಫ್ಟಿನೆಂಟ್ ಪದವಿಯನ್ನು ನೀಡಲಾಗಿದೆ.

ಇವರು ಪ್ರಸ್ತುತ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (ಕೆಪಿಟಿ), ಮಂಗಳೂರು ಇಲ್ಲಿ ಎಲೆಕ್ಟಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿಭಾಗಾಧಿಕಾರಿ ಹಾಗೂ ಹಿರಿಯ ಶ್ರೇಣಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 12 ವರ್ಷಗಳ ಸೇವಾ ಅನುಭವದ ಜೊತೆಯಲ್ಲಿ ಕಾಲೇಜಿನ ಎನ್‌ಸಿಸಿ ಘಟಕದ ಅಸೋಸಿಯೇಟ್ ಎನ್‌ಸಿಸಿ ಆಫೀಸರ್ (ಎಎನ್‌ಒ) ಆಗಿ ಕರ್ತವ್ಯವನ್ನು ಸಲ್ಲಿಸುತ್ತಿದ್ದಾರೆ. ನಿವೃತ್ತ ಅಧ್ಯಾಪಕ, ಹಿರಿಯ ಅನುಭವಿ ಹವ್ಯಾಸಿ ಯಕ್ಷಗಾನ ಕಲಾವಿದ ಕುಂಟಿಕಾನ ಮಠದ ಮನೆಯ ಕೆ.ಎಂ. ಶಾಮ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರನಾಗಿದ್ದಾರೆ. ಇವರ ಪತ್ನಿ ಅಕ್ಷಯ ಎಂ.ಎಸ್. ಮಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರದ್ಧಾ ಸರಸ್ವತಿ ಕೆ.ಎಂ. ಹಾಗೂ ಶಾರ್ವರಿ ಇಬ್ಬರು ಪುತ್ರಿಯರು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00