ಕರಾವಳಿ ತೀರದಲ್ಲಿ ಮುಂದಿನ ಒಂದು ವಾರ ಮತ್ತೆ ಮಳೆಗಾಲ?!

by Narayan Chambaltimar

ಭರ್ತಿ ಆರು ತಿಂಗಳು ಸುರಿದರೂ, ಈ ಬಾರಿ ಮಳೆಗೆ ಅತ್ಯುತ್ತರ ಭಾರತದ ಕೇರಳ ಕರಾವಳಿ ಸಹಿತ ಕರ್ನಾಟಕದ ಮಲೆನಾಡು ಬಿಟ್ಟಗಲಲು ಮನಸ್ಸಿಲ್ಲವೆಂಬಂತೆ ಮತ್ತೆ ಮಳೆಯಾಗುತ್ತಿದೆ. ಬಿಸಿಲಿನ ತಾಪದ ನಡುವೆ ಮಳೆಗಾಲ ಈಗ ಮತ್ತೊಮ್ಮೆ ಮುಂಗಾರಿನ ಫೀಲ್ ನೀಡುತ್ತಿವೆ. ನಮ್ಮ ಕರಾವಳಿಯಲ್ಲಿ ಇನ್ನೊಂದು ವಾರ ಮಳೆ ಸುರಿವ ಸಾಧ್ಯತೆಗತಳನ್ನ ಹವಾಮಾನ ಇಲಾಖೆ ಪ್ರಕಟಿಸಿದೆ.

ಆಂಧ್ರ-ಒಡಿಶಾ ಕರಾವಳಿಯ ಸಮೀಪ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ವಾಯು ಒತ್ತಡ ಛತ್ತೀಸ್‌ಗಢದ ಮೇಲೆ ಚಂಡಮಾರುತವಾಗಿ ದುರ್ಬಲಗೊಂಡಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಇದರ ಭಾಗವಾಗಿ ಮುಂದಿನ ಏಳು ದಿನಗಳ ಕಾಲ ಕೇರಳದಲ್ಲಿ ಮತ್ತು ಗಡಿಯ ನೆರೆ ರಾಜ್ಯಗಳಲ್ಲಿ ಲಘು/ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆಯೆಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಕರ್ನಾಟಕ ಕರಾವಳಿ ಮತ್ತು ಒಳನಾಡಲ್ಲಿ ಮಳೆ ಸಾಧ್ಯತೆ ಸೂಚಿಸಿರುವ ಇಲಾಖೆ ಮುನ್ನಚ್ಚರಿಕೆಗೆ ನಿರ್ದೇಶಿಸಿದೆ.

ಇದೇ 29ರಂದು ಎರ್ನಾಕುಲಂ, ತ್ರಿಶೂರ್, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾನುವಾರ ಹಳದಿ ಅಲರ್ಟ್ ಘೋಷಿಸಲಾಗಿದೆ.

ಈ ಬಾರಿ ಮೇ ಮಧ್ಯವಾರ 15ದಿನ ಮುಂಚಿತ ಕೇರಳಕ್ಕೆ ಮುಂಗಾರು ಕಾಲಿರಿಸಿತ್ತು. ಪರಿಣಾಮ ವಾಡಿಕೆಗಿಂತ ಅಧಿಕ ಮಳೆ ಈ ಬಾರಿ ದೊರೆತಿದೆ. ಇದು ಇತ್ತೀಚಿನ ವರ್ಷಗಳಗಲ್ಲಿ ದೊರೆತ ಅತ್ಯುತ್ತಮ ಮಳೆಯಾಗಿದೆ. ಮಳೆಗಾಲ ಸಾಗಿ ಕಾರಿರುಳು ಕರಗಿ, ಬಿಸಿಲೇರಬೇಕಾದ ಹೊತ್ತು ಮತ್ತೆ ಮಳೆಯಾಗುವುದೇ ಈ ಬಾರಿಯ ವೈಶಿಷ್ಠ್ಯ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00