ಕಾಸರಗೋಡು ಸರಕಾರಿ ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳಿಗೆ ಬಿಎಲ್ಎಸ್ ತರಗತಿಯನ್ನು ಕಾಲೇಜಿನ ಎನ್ ಸಿಸಿ ಶಿಬಿರದಲ್ಲಿ ನೀಡಲಾಯಿತು. ರೋಟರಿ ಕ್ಲಬ್ , ಐಎಪಿ ಹಾಗೂ ಐಎಂಎ ಸಹಯೋಗದಲ್ಲಿ ಜೀವನ ಕೌಶಲ್ಯದ ಮೂಲಭೂತ ಶಿಕ್ಷಣದರಿವು ನೀಡುವ ತರಬೇತಿ ವಿದ್ಯಾರ್ಥಿಗಳಿಗೆ ದೊರೆಯಿತು. ರೋಟರಿ ಕ್ಲಬ್ ಮತ್ತುಎನ್ ಸಿಸಿ ಯ 450ರಷ್ಟು ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡರು.
ಯೂನಿವರ್ಸಿಟಿ ಗ್ರಾಂಟ್ಸ್ ಕಮೀಷನ್ ಭಾರತಾದ್ಯಂತ ವಿ.ವಿ.ಗಳಲ್ಲಿ ಮತ್ತದರ ಆಶ್ರಯದ ಕಾಲೇಜುಗಳಲ್ಲಿ ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಸ್ ಎಲ್) ತರಬೇತಿಯನ್ನು ಕಡ್ಡಾಯಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕೌಶಲ್ಯ ಕರಗತ ಮಾಡಿಕೊಂಡರೆ ಹಠಾತ್ ಸಂಭವಿಸುವ ಹೃದಯಸ್ತಂಭನದಿಂದ ಜೀ ಸಂರಕ್ಷಣೆ ಮಾಡಬಹುದಾಗಿದೆ. ದೇಶದಲ್ಲಿ ಹೃದಯಸ್ತಂಭನ ಅತ್ಯಧಿಕವಾಗುತ್ತಿದ್ದು, ವರ್ಷಂಪ್ರತಿ ಲಕ್ಷಾಂತರ ಜನರು ಮೃತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವ ಸಂರಕ್ಷಣಾ ಕೌಶಲ್ಯದ ಅರಿವು ಎನ್.ಸಿ.ಸಿಗೆ ಅಗತ್ಯವಾಗಿದೆ.
ತರಬೇತುದಾರ ರೋಟೀರಿಯನ್ ಡಾ ಬಿ ನಾರಾಯಣ ನಾಯ್ಕ್ (ಅಧ್ಯಕ್ಷರು ರೋಟರಿ ಕ್ಲಬ್ ಕಾಸರಗೋಡು, ಸಂಚಾಲಕರು ಐಎಂಎ),
ಛಾಯಾಗ್ರಾಹಕ ಶ್ರೀಕಾಂತ್, ಜೆ.ಎಚ್.ಐ.ಶ್ರೀಜಿತ್, ಅಖಿಲ್ ಬ್ರದರ್ , ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸಹಾಯಕಿ ಶೀಬಾ NCC ಕಡೆಯಿಂದ ಕರ್ನಲ್ ಸಜೀಂದ್ರನ್, ಕಮಾಂಡಿಂಗ್ ಆಫೀಸರ್ 32 ಕೇರಳ BnNCC, ಪಯ್ಯನ್ನೂರ್ ಲೆಫ್ಟಿನೆಂಟ್ ಕರ್ನಲ್ ಅನುರಾಜ್ ಟಿವಿ, ಆಡಳಿತಾಧಿಕಾರಿ (D. ಪಯ್ಯನ್ ಕೇರಳ BAN 32) ನಂದಕುಮಾರ್ ಕೋರೋತ್, ಅಸೋಸಿಯೇಟ್ NCC ಅಧಿಕಾರಿ ಲೆಫ್ಟಿನೆಂಟ್ ದೀಪಾ ಮೋಹನ್, ಸಹಾಯಕ NCC ಅಧಿಕಾರಿ ಉಪ ಮೇಜರ್ ಡಿವಿಎಸ್ ರಾವ್ ಭಾಗವಹಿಸಿದ್ದರು. ಭಾಗವಹಿಸುವವರಿಗೆ BLS, ಏರ್ ವೆ ನಿರ್ವಹಣೆ, ವಿದೇಶಿ ದೇಹ ತೆಗೆಯುವಿಕೆ(ಫಾರಿನ್ ಬೊಡಿ ರಿಮೂವಲ್ )ಹೈಮ್ಲಿಚ್ ಕುಶಲತೆ, ಮಗು ಮತ್ತು ವಯಸ್ಕ CPR ನಲ್ಲಿ ತರಬೇತಿ ನೀಡಲಾಯಿತು