ಚೌತಿಯ ಕೊಡುಗೆ: ಕುಂಬ್ಳೆ ಕಂಚಿಕಟ್ಟೆ ರಸ್ತೆಯ ದೀಪಸ್ತಂಭ ಉದ್ಘಾಟನೆ

by Narayan Chambaltimar

ಕುಂಬಳೆ: ಕುಂಬಳೆ ಪೇಟೆಯ ಕಂಚಿಕಟ್ಟೆ ರಸ್ತೆ ಆರಂಭದ ನಾಯಕ್ಸ್ ಜಂಕ್ಷನ್ ನಲ್ಲಿ ಸ್ಥಾಪಿಸಿದ ನೂತನ ಮಿನಿಮಾಸ್ಟ್ ಲೈಟ್(ದೀಪಸ್ತಂಭ)ನ್ನು ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿ ಚೌತಿಯ ಕೊಡುಗೆಯಾಗಿ ನಾಡಿಗೆ ಸಮರ್ಪಿಸಿದರು.
ಗೌರೀ ಗಣೇಶ ಹಬ್ಬದ ಮುಸ್ಸಂಜೆ ನಾಡಿಗೆ, ಬೀದಿಗೆ ಬೆಳಕು ನೀಡುವ ದೀಪಸ್ತಂಭದ ಉದ್ಘಾಟನೆ ಮಾಡಿರುವುದು ಸ್ಮರಣೀಯ ಎಂದು ಶಾಸಕರು ನುಡಿದರು.

ಕುಂಬಳೆ ಗ್ರಾ.ಪಂ.ಅಧ್ಯಕ್ಷೆ ತಾಹಿರಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸಬೂರ, ನಸೀಮಾ ಖಾಲಿದ್, ಬಿ.ಎ.ರಹ್ಮಾನ್, ವಾರ್ಡು ಸದಸ್ಯೆ ಶೋಭಾ, ಪಂ.ಸದಸ್ಯ ರವಿರಾಜ್, ಯೂಸುಫ್ ಉಳುವಾರ್,ಹಿರಿಯ ಪತ್ರಕರ್ತ ಎಂ.ನಾ. ಚಂಬಲ್ತಿಮಾರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು ಕುಂಬ್ಳೆ, ಅಜೀಜ್ ಮರಿಕ್ಕೆ, ಎ.ಕೆ.ಆರಿಫ್, ರವಿ ಪೂಜಾರಿ, ಶಶಿ ಮೇಸ್ತ್ರಿ, ಪೃಥ್ವೀರಾಜ್ ಶೆಟ್ಟಿ, ಕೇಶವ ದರ್ಬಾರ್ ಕಟ್ಟೆ, ದೀಪಕ್ ನಾಯಕ್, ಶಂಕರ ಆಳ್ವ,
ಸುರೇಶ್ ಹೆಗ್ಡೆ, ಅರ್ಚನಾ ಪ್ರಭು, ಆಶಾ ಪ್ರಭು, ಸುಜಾತ ಕುಂಬ್ಳೆ, ನಿಶಾ ಸಹಿತ ಊರ ಪ್ರಮುಖರು ಉಪಸ್ಥಿತರಿದ್ದರು

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00